ಆದರ್ಶ ಎಂಟರ್ ಪ್ರಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಬಿರುಗಾಳಿ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು,ಎ ಅರ್ಹತಾಪತ್ರವನ್ನು ನೀಡಿದೆ. `ಆ ದಿನಗಳು` ಚಿತ್ರದ ಮೂಲಕ ಎಲ್ಲರ ಮನ ಸೂರೆಗೊಂಡ ಚೇತನ್ `ಬಿರುಗಾಳಿ`ಯಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. `ಗೆಳೆಯ` ಚಿತ್ರವನ್ನು ನಿರ್ದೇಶಿಸಿದ್ದ ನೃತ್ಯ ನಿರ್ದೇಶಕ ಹರ್ಷ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯದಲ್ಲೇ `ಬಿರುಗಾಳಿ` ಕರ್ನಾಟಕದ ನೆಚ್ಚಿನ ಚಿತ್ರಮಂದಿರಗಳಲ್ಲಿ ಬೀಸಲಿದೆ.
ಆದರ್ಶ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮನೋಜ್ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ಅರ್ಜುನ್ ಸಂಗೀತ, ಡಿಫ಼ರೆಂಟ್ ಡ್ಯಾನಿ ಸಾಹಸ, ದೀಪು ಎಸ್ ಕುಮಾರ್ ಸಂಕಲನ, ಯೋಗಾನಂದ ಸಂಭಾಷಣೆ, ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ ಗೀತರಚನೆ, ಮಹೇಶ್, ಯೋಗಿ ಸಹನಿರ್ದೇಶನ ಹಾಗೂ ರಮೇಶ್ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ಸಿತಾರವೈದ್ಯ, ಮೊನಿಶಾ, ಕಿಶೋರ್, ಮೈಕೋನಾಗರಾಜ್, ಪರಮೇಶಿ, ಕುರಿಗಳು ಪ್ರತಾಪ್, ಗಿರಿ, ಪವನ್, ಕರಿಷ್ಮಾ ಮುಂತಾದವರಿದ್ದಾರೆ.